Table of Contents
ToggleShankar Gowda Patil, Hosanagara, Ganesha Festival, Namma Hosanagara, Hms Hosanagara, Mavinkoppa, Ganpathi Devastana, Jaynagara.
“Celebrate the festival with peace and harmony”
Shankar Gowda Patil
ಹೊಸನಗರ: ಇನ್ನೇನು ಗಣೇಶ ಹಬ್ಬಕ್ಕೆ ಕೆಲವು ದಿನಗಳ ಬಾಕಿ ಇದ್ದು ಹಬ್ಬವನ್ನು ಕಾನೂನು ನಿಯಮ ಅನುಸಾರ ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಹೊಸನಗರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಶಂಕರ್ ಗೌಡ ಪಾಟೀಲ್ ಹೇಳಿದರು.

Hosanagara PSI
ಪಟ್ಟಣದ ಪೊಲೀಸ್ ಠಾಣ ಆವರಣದಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಆವರು ನಮ್ಮ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸುವಂತಹ ಪ್ರತಿಯೊಂದು ಸಂಘ-ಸಂಸ್ಥೆ ಹಾಗೂ ಗ್ರಾಮಸ್ಥರು ಕಡ್ಡಾಯವಾಗಿ ಸರ್ಕಾರ ಸೂಚಿಸಿರುವ ನಿಯಮವನ್ನ ಪಾಲಿಸಬೇಕು ಹಾಗೂ ಸೂಕ್ತ ಅನುಮತಿಯೊಂದಿಗೆ ಇಲಾಖೆ ಹೇಳಿರುವಂತಹ ಎಲ್ಲಾ ಮುಂಜಾಗ್ರತಾ ಕ್ರಮವನ್ನ ಅನುಸರಿಸುವ ಮೂಲಕ ಹಬ್ಬವನ್ನು ಆಚರಿಸಬೇಕು ಎಂದರು. ಹಾಗೂ
ನಿಗದಿತ ಸಮಯದೊಳಗೆ ಅನುಮತಿಯನ್ನು ಪಡೆಯಬೇಕು ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಸಿಸಿ ಕ್ಯಾಮರ ಹಾಗೂ ಬೆಳಕಿನ ವೆವಸ್ಥೆ ಕಡ್ಡಾಯ ವಾಗಿರಬೇಕು ಅಹಿತಕರ ಘಟನೆಗಳು ನಡೆದಲ್ಲಿ ಪೊಲೀಸ್ ಠಾಣಾ ಗಮನಕ್ಕೆ ತರಬೇಕು.

ಪ್ರತಿಷ್ಠಾಪನ ಸಮಯದಲ್ಲಾಗಲಿ ವಿಸರ್ಜನಾ ಸಮಯದಲ್ಲಾಗಲಿ ಪ್ರಚೋದನಕಾರಿ ಹೇಳಿಕೆ ಅಸಭ್ಯ ವರ್ತನೆ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮವನ್ನು ಜರುಗಿಸಲಿದ್ದು ಎಲ್ಲದಕ್ಕೂ ಆಯೋಜಕರೆ ಸಂಪೂರ್ಣ ಹೊರೆಯನ್ನ ಹೊರಬೇಕು. ಬೆಳಿಗ್ಗೆ 6:00 ರಿಂದ 10 ರವರೆಗೆ ಮಾತ್ರ ದ್ವನಿ ವರ್ಧಕ ಬಳಕೆಗೆ ಮಾತ್ರ ಅವಕಾಶ ಹಾಗೂ ಸರ್ಕಾರ ಆದೇಶಿಸಿರುವ ನಿಯಮವನ್ನ ಅನುಸರಿಸಿ ಸೂಕ್ತವಾದ ಮುಂಜಾಗ್ರತೆ ಕ್ರಮದೊಂದಿಗೆ ಹಬ್ಬವನ್ನು ಆಚರಿಸಿ ಎಂದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮಾಯಪ್ಪ, ಪ್ರಕಾಶ್, ಮಹೇಶ್, ಹಾಗೂ ವಿವಿಧ ಗಣೇಶ ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
– ಮನು ಸುರೇಶ್
Shankar Gowda Patil, Hosanagara, Ganesha Festival, Namma Hosanagara, Hms Hosanagara, Mavinkoppa, Ganpathi Devastana, Jaynagara.
