ಹೊಸನಗರ :ಹೊಸನಗರ ತಾಲೂಕಿನ ಸ್ಥಳೀಯ ಮಟ್ಟದಲ್ಲಿ ‘ಚಂದ್ರ ಬೀಡಿ ಚಂದ್ರ’ ಎಂದೇ ಪರಿಚಿತರಾಗಿದ್ದ ಚಂದ್ರಶೇಖರ್ (ವಯ: 64) ಅವರು ಹೃದಯಾಘಾತದಿಂದ ಅಸುನೀಗಿದ್ದಾರೆ. ನಿನ್ನೆ (ರಾತ್ರಿ) ಸುಮಾರು 8.45ಕ್ಕೆ ದ್ಯಾವರ್ಸದ ನಿವಾಸದಲ್ಲಿ ಅವರು ಅಸುನೀಗಿದ್ದಾರೆ.ಅನೇಕ ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಚಂದ್ರಶೇಖರ್ ಅವರು 2021 ರಿಂದ ಸಾರ್ವಜನಿಕವಾಗಿ ಎಲ್ಲಿಗೂ ಕಾಣಿಸಿಕೊಳ್ಳುತ್ತಿರಲಿಲ್ಲ.
‘ಚಂದ್ರ ಬೀಡಿ ಚಂದ್ರ’ ಅವರ ವಿಶಿಷ್ಟ ಹೆಸರು ಹೊಸನಗರ ಪ್ರದೇಶದಲ್ಲಿ ಬಹುಪರಿಚಿತವಾಗಿತ್ತು. ತೀವ್ರ ಹೃದಯಾಘಾತವೇ ಅವರ ಮರಣಕ್ಕೆ ಕಾರಣ ಎಂದು ಕುಟುಂಬದವರು ತಿಳಿಸಿದ್ದಾರೆ.
ಇದನ್ನೂ ಓದಿ:Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ